ಕೆ.ಕೆ.ಆರ್ ಮೂವೀ ಹೌಸ್ ಲಾಂಛನದಲ್ಲಿ ಕಿರಣ್ಕುಮಾರ್ ರೆಡ್ಡಿ ಅವರು ನಿರ್ಮಿಸುತ್ತಿರುವ ‘ಅಲೆ’ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ.
ಧರ್ಮಸ್ಥಳಕ್ಕೆ ಹೊರಟಿದ್ದ ನಾಯಕ-ನಾಯಕಿಯನ್ನು ಖಳನಾಯಕ ತಡೆಯುತ್ತಾನೆ. ಆಗ ನಾಯಕ ಹಾಗೂ ಖಳನಾಯಕನ ನಡುವೆ ಮಾತಿನ ಚಕಮಕ್ಕಿ ನಡೆದು ಹೊಡೆದಾಟವಾಗುತ್ತದೆ. ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಮಾಡಿದ ಈ ಸಾಹಸ ಸನ್ನಿವೇಶ ಸೇರಿದಂತೆ ಕೆಲವು ಮಾತಿನ ಭಾಗದ ಸನ್ನಿವೇಶಗಳ ಚಿತ್ರೀಕರಣ ಮೊದಲ ಹಂತದಲ್ಲಿ ನಡೆದಿದೆ.
ಆದತ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿಜಯ್ ಭರಮಸಾಗರ ಸಂಭಾಷಣೆ ಬರೆದಿದ್ದಾರೆ. ಎ.ಕೆ.ಎನ್ ಸೆಬಾಸ್ಟೇನ್ ಛಾಯಾಗ್ರಾಹಕರಾಗಿರುವ ಈ ಚಿತ್ರಕ್ಕೆ ಮನೋಮೂರ್ತಿ ಸಂಗೀತ ನೀಡಿದ್ದಾರೆ. ಕೆ. ಎಂ.ಪ್ರಕಾಶ್ ಸಂಕಲನ ಹಾಗೂ ಬಾಬುಖಾನ್ ಕಲಾ ನಿರ್ದೇಶನ ‘ಅಲೆ’ ಚಿತ್ರಕ್ಕಿದೆ.
‘ಮುಂಗಾರು ಮಳೆ’ ಚಿತ್ರದ ನಿರ್ಮಾಪಕ ಇ.ಕೃಷ್ಣಪ್ಪ ಅವರ ಸಂಬಂಧಿ ತನುಷ್ ಈ ಚಿತ್ರದ ನಾಯಕ. ಹರ್ಷಿಕ ಪೂಣಚ್ಛ ನಾಯಕಿ. ಚಂದ್ರಶೇಖರ್, ರಾಮಕೃಷ್ಣ, ಶಕೀಲಾ, ಸುಮನ್ ಶೆಟ್ಟಿ, ಜೊಸೈಮನ್, ಪದ್ಮಜಾರಾವ್, ತಬಲ ನಾಣಿ, ಭವಾನಿಪ್ರಕಾಶ್, ಪಿ.ಎನ್.ಸತ್ಯ, ಸುರೇಶ್ಚಂದ್ರ, ಹರೀಶ್ರಾಯ್, ಮಿತ್ರ, ಕೆಂಪೇಗೌಡ, ಬಿರಾದಾರ್, ವಿಜಯಸಾರಥಿ, ದುಬೈ ರಫ಼ೀಕ್, ಸೂರ್ಯಕಿರಣ್, ಸತೀಶ್ ಗೌಡ, ದಿಲೀಪ್ ರಮಣ, ಮಾ||ಮಂಜುನಾಥ್, ಮಾ||ಚಿರಂಜೀವಿ, ಡ್ಯಾನಿ ಕುಟ್ಟಪ್ಪ, ನವೀನ್, ಸಂಜೀವ್, ಪ್ರಸಾದ್ ನಾಯಕ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.